ಹದಿನಾಲ್ಕು ವರ್ಷಗಳ ನಂತರ

ಹದಿನಾಲ್ಕು ವರುಷಗಳ ಮೇಲೆ
ಸವಿನೆನಪುಗಳ ಬುತ್ತಿಯಲಿ
ಏನೇನೊ ಹಲವು ಕನಸನೆ ಹೊತ್ತು
ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ

ಕರಿಮಣ್ಣಿನ ಏರೆಹೊಲದ ದಿಬ್ಬದಿ
ನನ್ನೂರು ಕಾಣುವ ತವಕದಿ
ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ
ಜುಳು… ಜುಳು… ಹರಿಯುತಿಹಳು
ಕಷ್ಣೆಯುದರದೊಳಗಿನ `ಡೋಣಿ’

ಹದಿನಾಲ್ಕು ವರ್ಷಗಳ ಹಿಂದೆ
ಹೇಗಿತ್ತು ಹಾಗೆ ಇಂದಿಗು ಎಲ್ಲೆಲ್ಲೂ
ಪರಿಚಯದ ಮರುಛಾಯೆ
ಕಣ್ಮುಂದೆ ತುಂಬಿ ಮರುಕಳಿಸಿತ್ತು
ಮನದಿ ಇಲ್ಲುಂಡ ಸುಖವೆಲ್ಲ
ಬಾಲ್ಯದ ಬನವ ತವಕದಲಿ
ಹೊಕ್ಕಾಗ ಎಲ್ಲೆಡೆಗೂ ಹದಿನಾಲ್ಕು ವರ್ಷಗಳ
ಮುದುಡಿದ ಮುದಿ ನೆರಳು ಕವಿದಿತ್ತು

ವರುಣ ದುಬಾರಿಯಾಗಿದ್ದು…
ಎಲ್ಲೆಡೆ ಬಣ… ಬಣ
ನೆಲ ಜಲ – ಮನಗಳು
ನಿಂತ ಮರವಾಗಿದ್ದವು ಒಣಗಿ…

ಹೊಟ್ಟೆಪಾಡಿಗಾಗಿ ಗುಳೆ ಎದ್ದು ಹೋಗಿದ್ದ
ನನ್ನೂರಿನ ಅಣ್ಣ-ತಮ್ಮಂದಿರು
ಅಕ್ಕ-ತಂಗಿಯರು ಕಾಣದ
ಓಣೆಲ್ಲಾ ಮೌನ ಆವರಿಸಿತ್ತು

ಓಡಾಡಿ… ಆಡಿದ
ಬೆಚ್ಚಗಿನ ಮನೆಗಳೆಲ್ಲಾ ನೆಲಕೆ
ಕುಸಿದ ಮಣ್ಣಿನ ಗುಡ್ಡೆಗಳೆಲ್ಲ
ಹುಗಿದಿಟ್ಟುಕೊಂಡ ಬಾಲ್ಯದ ನೆನಪುಗಳೆಲ್ಲಾ
ಬಿದ್ದಿದ್ದವು ಮಾಸಿ ತಬ್ಬಲಿಯಾಗಿ

ಅಂದು ಗಿಜಿ-ಗಿಜಿ ತುಂಬಿದ
ಭೇದವೆಣಿಸದ ಮನಗಳು ಓಣಿಗಳು
ನಿರ್ಜೀವ ಸವೆತದ ಮುದುಡಿದ
ಆ ಹಿರಿಜೀವಗಳ ಅಸಹಾಯಕತೆ ಕಾಣುತ

ಕಣ್ಮುಂದೆ ಕಟ್ಟುತಲಿ
ಜೀವ ಮರಮರನೆ ಬಳಲಿತು
ಅವ್ವ-ಅಪ್ಪ- ಹೋದ
ಅಜ್ಜ-ಮುತ್ತಜ್ಜರು ಹೋದ
ಮನೆ-ಮನ-ಬರಿದಾಗಿತ್ತು

ಆ ಹಿರಿಜೀವಗಳ ಸ್ಪರ್ಶದ
ಪ್ರೀತಿ ಉಂಡ ಬಾಲ್ಯವು
ಅವರೊಡನೆ ಈ ಲೋಕವು ಹೋಯ್ತು
ಎಲ್ಲೋ ಮಣ್ಣಲ್ಲಡಗಿದ….
ಈ ಜಗದ ರೀತಿ ನೀತಿಯಿದು

ಹಸಿ ಗಾಯದಿ ಬಸಿವ
ನೆತ್ತರ ತೆರಹದಿ
ಬರಿಯ ವ್ಯಥೆಯೇ ಜೀವ ತುಂಬಿರಲು

ಸುಡು ಬಿಸಿಲಿನ ನಡು ಹಗಲು
ಮುಸ್ಸಂಜೆ ಕವಿದಿತ್ತು…
ಮನಕ್ಕೆಲ್ಲ ತಂಪು ಎರೆದಿತ್ತು
ಅಂದು ಇಂದಿನ ನಡುವೆ ತಿರುಗಿತ್ತು
ಹದಿನಾಲ್ಕು ವರ್ಷಗಳ
ಕಠೋರ ನಿಷ್ಕರುಣ ಕಾಲಚಕ್ರ

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾ ಬಾ ಸಿರಿಯೆ
Next post ಸೇದಿದಿಯಾ ಬತ್ತಿ ನೀ ಸೇದಿದಿಯಾ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys